Promote your company/organization in our website through advertisements! For more queries, mail us to:  gkmandaladelhi@gmail.com 

ಸಮಾಜಮುಖಿ ಕಾರ್ಯಗಳಲ್ಲಿ ಗೋಕರ್ಣಮಂಡಲದ ಕೊಡುಗೆ ಅಪಾರರಾಮಚಂದ್ರ ಭಟ್

 

ಗೋಕರ್ಣ ಮಂಡಲವು ಅಕ್ಟೋಬರ್ 2, 2025 ರಂದು ಲೋದಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಿತು. 50 ಕ್ಕೂ ಹೆಚ್ಚು ಸದಸ್ಯರು ಒಟ್ಟುಗೂಡಿ ಸರಸ್ವತಿ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆದರುವಿದ್ವಾನ್ ಶ್ರೀ ಸತೀಶ್ ಭಟ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಹೆಗಡೆ ಮತ್ತು ಶ್ರೀಮತಿ ಮೇಖಲಾ ಗಣೇಶ್ ಅವರು ಪೂಜೆಯನ್ನು ನೆರವೇರಿಸಿದರು.

ಪೂಜಾ ಕಾರ್ಯಕ್ರಮದ ಬಳಿಕ ಶ್ರೀಮತಿ ಅನುರಾಧಾ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಂಡಲದ ಹಿರಿಯ ಸದಸ್ಯರಾದ ಶ್ರೀ ರಾಮಚಂದ್ರ ಭಟ್ ಸಿ.ಎ ಮತ್ತು ಡಾಅನಿಲ್ ಭಟ್ ಅವರನ್ನು ಸಮಾಜಕ್ಕೆ ಅವರು ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು

ಸನ್ಮಾನಿತರು ತಾವು ನಡೆದು ಬಂದ ದಾರಿಯನ್ನು ಸ್ಮರಿಸಿಕೊಳ್ಳುತ್ತಾ ಮುಂದಿನ ತಲೆಮಾರಿನವರು ಹವ್ಯಕ ಸಂಸ್ಕೃತಿಯನ್ನು ಶ್ರದ್ಧೆಯಿಂದ ಅನುಸರಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

 

ಇದೇ ಸಂದರ್ಭದಲ್ಲಿ ಮಂಡಲದ ಬಹುನಿರೀಕ್ಷಿತ ಸ್ಮರಣ ಸಂಚಿಕೆಯಾದ ಗೋಕರ್ಣವಾಣಿಯನ್ನು ಗೌರವಾನ್ವಿತ ಅತಿಥಿಗಳು ಬಿಡುಗಡೆ ಮಾಡಿದರು

ನಂತರ ಪ್ರತೀ ವರ್ಷ ನೀಡುತ್ತಾ ಬಂದಿರುವ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನು ಅರ್ಹ ಮೂವರು ವಿದ್ಯಾರ್ಥಿಗಳಿಗೆ ನೀಡಲಾಯಿತು.

ನಂತರ ನೆರೆದ ಸದಸ್ಯರು ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿದರುನೂತನ ಅಧ್ಯಕ್ಷರಾಗಿ ಶ್ರೀ ಪ್ರಸಾದ್ ಭಟ್ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಭಟ್ಪ್ರಧಾನ ಕಾರ್ಯದರ್ಶಿಗಳಾಗಿ – ಶ್ರೀ ಸಂತೋಷ್ ಉಪಾಧ್ಯಾಯ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀಮತಿ ಕಿರಣ ಭಟ್. ಖಜಾಂಚಿಗಳಾಗಿ ಶ್ರೀಮತಿ ಲಲಿತಾ ಹೆಗಡೆ ಆಯ್ಕೆಯಾದರುಆಯ್ಕೆಗೊಂಡ ಕಾರ್ಯಕಾರಿ ಸದಸ್ಯರುಗಳುಶ್ರೀಮತಿ ಶಾಲಿನಿ ಪ್ರಶಾಂತ್ದೀಪಕ್ ಶರ್ಮಾಅಭಿಷೇಕ್ ಡಿಮಹೇಶ್ ಎಸ್ಭವಾನಿ ಹೆಗಡೆಉಷಾ ಭಟ್ಯಶಸ್ವಿ ಭಟ್ಪ್ರತೀಕ್ ಹೆಗಡೆ

ಇದೇ ಸಂದರ್ಭದಲ್ಲಿ ತಾಯ್ನಾಡಿಗೆ ಮರಳುತ್ತಿರುವ ಶ್ರೀ ಶ್ರೀಪಾದ ಭಟ್ ಮತ್ತು ಶ್ರೀಮತಿ ರೋಹಿಣಿ ಭಟ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತುಅಧ್ಯಕ್ಷರಾದ ಶ್ರೀಮತಿ ಶಾಲಿನಿ ಪ್ರಶಾಂತ್ ಅವರು ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ಧನ್ಯವಾದ ಹೇಳಿದರುಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಡಾಗಣೇಶ್ ಹೆಗಡೆಯವರು ವಂದನಾರ್ಪಣೆ ಮಾಡಿದರು.

ಎರಡು ದಶಕಗಳ ಹಿಂದೆ ಶ್ರೀ ಸ್ವರ್ಣವಲ್ಲೀ ಸಂಸ್ಥಾನದಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ದೆಹಲಿಗೆ ಆಗಮಿಸಿ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾದ ಸಂದರ್ಭ. ಚಿತ್ರದಲ್ಲಿ ನ್ಯಾಯಮೂರ್ತಿ ಶ್ರೀ ರಾಮಾ ಜೋಯಿಸರನ್ನೂ ಒಳಗೊಂಡು ಗೋಕರ್ಣ ಮಂಡಲದ ಇತರ ಸದಸ್ಯರನ್ನು ಕಾಣಬಹುದು. 
Photography by Aditya Satish Hegde
Polish painting by Anvita Pramod Bhat
Photography by Aditya Satish Hegde

|| ಶುಭಾಶಿಷಃ ||

ತಮಗೆಲ್ಲರಿಗೂ ತಿಳಿದಿರುವಂತೆ ಬೇರೆ ಬೇರೆ ಊರುಗಳಿಂದ ಉದ್ಯೋಗವನ್ನರಸಿ ಭಾರತದ ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಹವ್ಯಕ ಬಾಂಧವರ ಪ್ರೇರಣೆಯಿಂದ ಹವ್ಯಕರಿಗಾಗಿ ಸ್ಥಾಪಿಸಲ್ಪಟ್ಟ ‘ಗೋಕರ್ಣಮಂಡಲ’ ಕಳೆದ 43 ವರ್ಷಗಳಿಂದ ಸಾಂಸ್ಕೃತಿಕ, ಧಾರ್ಮಿಕ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕಾಲಮಾನಕ್ಕನುಗುಣವಾಗಿ ಅಥವಾ ಭವಿಷ್ಯದ ಪರಿಸ್ಥಿತಿಗನುಗುಣವಾಗಿ ನಮ್ಮ ಸಂಘವು ಅಂತರ್ಜಾಲಪುಟವನ್ನು ಪ್ರಾರಂಭಿಸುವ ಚಿಂತನೆ ತುಂಬಾ ಸ್ವಾಗತಾರ್ಹವಾಗಿದ್ದು ಇದೇ ಬರುವ ದಿನಾಂಕ 15-01-2022 ರಂದು ಉತ್ತರಾಯಣದ ಪುಣ್ಯಕಾಲದಲ್ಲಿ ‘ಗೋಕರ್ಣಮಂಡಲ.ಇನ್’ ಎಂಬ ಅಂತರ್ಜಾಲಪುಟವನ್ನು ಉದ್ಘಾಟಿಸಿ ಅದರ ಸದುಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂಬುದಾಗಿ ಆಶಿಸುತ್ತಾ ಪರಿಪೂರ್ಣ ಜೀವನ ಎಲ್ಲರದಾಗಲಿ, ಜೀವನದಲ್ಲಿ ಎಲ್ಲರೂ ಆನಂದವನ್ನು ಅನುಭವಿಸುವ ಯೋಗ-ಯೋಗ್ಯತೆ ಪಡೆದುಕೊಳ್ಳಲಿ. “ಸರ್ವೇ ಭದ್ರಾಣಿ ಪಶ್ಯಂತು” ಎಲ್ಲರೂ ಮಂಗಲಮಯವಾದುದನ್ನು ನೋಡುವಂತಾಗಲಿ. “ಲೋಕಾಃ ಸಮಸ್ತಾಃ ಸುಖಿನೋ ಭವಂತು”

ವೇದಮೂರ್ತಿ ಸತೀಶ ಭಟ್

ಮಹರ್ಷಿ ಆಶ್ರಮ

Scroll to Top